ಪಟ್ಟಣದ ನಿವಾಸಿ ಕಾಶಪ್ಪ ಶಿವಮೂರ್ತಿ ಹರಿಜನ ಅವರು ತಮ್ಮ ಬ್ಯಾಂಕ್ ಖಾತೆಯಿಂದ ₹ 90,000 ಹಣವನ್ನು ಪುಣೆಯಲ್ಲಿರುವ ಎಟಿಎಂ ಕೇಂದ್ರದಿಂದ ಲಪಟಾಯಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಾಶಪ್ಪ ಅವರಲ್ಲದೇ, ಮಾಜಿ ಸೈನಿಕ, ನಿವೃತ್ತ ಅಧಿಕಾರಿ ಹಾಗೂ ಖಾಸಗಿ ಕಂಪನಿಯ ಉದ್ಯೋಗಿಯ ಖಾತೆಯಿಂದಲೂ ಹಣ ಎಗರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.