ತೆಲಸಂಗ: ‘ಆಧುನಿಕ ಜಗತ್ತಿನಲ್ಲಿ ದಿನ ನಿತ್ಯದ ಬಳಕೆಗೆ ಅಗತ್ಯವಾಗಿರುವ ವಸ್ತುಗಳಲ್ಲಿ ಇಂಧನವೂ ಒಂದಾಗಿದೆ. ರೈತರು ಕೃಷಿ ಚಟುವಟಿಕೆಗಳಿಗೆ ಬಳಸುವ ಯಂತ್ರಗಳಿಗೆ ಬೇಕಿರುವ ಇಂಧನ ಖರೀದಿಗೆ ಬಂಕ್ ಹುಡುಕಿಕೊಂಡು ಹೋಗಬೇಕಿತ್ತು. ಈಗ ಜೈವಿಕ ಇಂಧನ (ಬಯೊ ಡೀಸೆಲ್)ವನ್ನು ಹಳ್ಳಿಗಳಲ್ಲಿನ ಅಂಗಡಿಯಲ್ಲಿಟ್ಟು ಮಾರಾಟ ಮಾಡಬಹುದಾಗಿದೆ. ಇದನ್ನು ಭವಿಷ್ಯದ ಇಂಧನ ಎಂದೇ ಬೀಂಬಿಸಲಾಗುತ್ತಿದೆ’ ಎಂದು ಹನಮಾಪೂರದ ಅಮರೇಶ್ವರ ಸ್ವಾಮೀಜಿಗಳು ಹೇಳಿದರು.
ಗ್ರಾಮದಲ್ಲಿ ರೈತ ಮಿತ್ರ ಬಯೊ ಡಿಸೆಲ್ ಮಾರಾಟ ಮಳಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಎಲ್ಲೆಡೆ ಇಂಧನದ ಕೊರತೆ ತಲೆದೋರುತ್ತಿದೆ. ಸದ್ಯಕ್ಕೆ ಪರಿಸರ ಕಾಳಜಿಯ ಈ ಇಂಧನ ಯಂತ್ರಗಳಿಗೂ ಅನುಕೂಲವಾಗಿದೆ. ಇದರಿಂದ ಸಮಯ ಹಾಗೂ ಹಣ ಉಳಿತಾಯವಾಗಲಿದೆ’ ಎಂದರು.
ಹಿರೇಮಠದ ವೀರೇಶ್ವರ ದೇವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಹಿರಿಯರಾದ ಐ.ಎಲ್. ಕುಮಠಳ್ಳಿ, ಅರವಿಂದ ಉಂಡೋಡಿ, ಅಮೋಘ ಖೊಬ್ರಿ, ಈಶ್ವರ ಉಂಡೋಡಿ, ಜಗದೀಶ ಮಠದ ಇದ್ದರು.