ಈ ಭೂಮಿಯು ಮನುಷ್ಯನ ಎಲ್ಲ ಅಗತ್ಯಗಳಿಗೆ ಮೂಲಭೂತವಾಗಿರುವುದು. ಆತನ ಅವಿಭಾಜ್ಯ ಅಂಗವಾಗಿದೆ. ಈ ಭೂಮಿಯೆ ಇರದಿದ್ದರೆ ನಾವು ಇರುತ್ತಿರಲಿಲ್ಲ. ಇಂತಹ ಭೂಮಿಯು ನಮಗೆ ಆಹಾರ ನೀಡುತ್ತದೆ. ಇಲ್ಲೇ ಅನವಶ್ಯವಾದ ಕಸವೂ ಹುಟ್ಟುತ್ತದೆ. ಇಲ್ಲಿ ನಾವು ಅವಶ್ಯವಾದ ಆಹಾರ ಮತ್ತು ಅನಿವಾರ್ಯ ಆದವುಗಳನ್ನು ಸ್ವೀಕರಿಸುತ್ತೇವೆ. ಹಾಗೆಯೆ ಶರೀರವೆಂಬುದು ಭೂಮಿಯೇ. ಇದನ್ನು ಬಳಸುವ ಪರಿಯನ್ನು ಮಾತ್ರ ಮನುಷ್ಯ ತಿಳಿಯುತ್ತಿಲ್ಲ. ಭಗವಂತ ನೀಡಿದ ಈ ಶರೀರವನ್ನು ಮಾನವ ತನ್ನ ಸ್ವಾರ್ಥ, ದುರಾಸೆಯ ಆಲೋಚನೆಗಳಿಂದ ವ್ಯರ್ಥಗೊಳಿಸಿಕೊಳ್ಳುತ್ತಿದ್ದಾನೆ.