ಮನುಷ್ಯನ ಜೀವನದಲ್ಲಿ ಗುರುವಿನ ಪಾತ್ರವು ಬಹಳ ಮುಖ್ಯವಾದುದಾಗಿದೆ. ಪ್ರತಿಯೊಂದು ಹಂತದಲ್ಲಿಯೂ ಗುರುವಿನ ಮಾರ್ಗದರ್ಶನ ಇಲ್ಲದೆ ಯಾವುದೂ ಸಾಧ್ಯವಿಲ್ಲ. ನಾವು ಸರಿಯಾದ ಮಾರ್ಗದಲ್ಲಿ ಸಾಗಬೇಕಾದರೆ, ನಮ್ಮ ಜೀವನವು ಸುಖಮಯವಾಗಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯವಾಗಿದೆ. ಗುರುಗಳಿಂದ ನಾವು ಲಿಂಗದೀಕ್ಷೆಯನ್ನು ಹೊಂದಿದರೆ ಸರಿಯಾದ ರೀತಿಯಿಂದ ಸಾಧನೆಯಾಗುತ್ತದೆ. ಗುರುವಿನ ಮಾತುಗಳನ್ನು ನಿತ್ಯವೂ ಆಲಿಸುವುದರಿಂದ ನಮ್ಮ ಜೀವನ ಶಾಂತಿಯಿಂದ ಸಾಗಿಸಬಹುದು. ನಮ್ಮ ನಿತ್ಯ ಕಾಯಕ– ದಾಸೋಹಗಳು ಕೂಡ ಗುರುವಿನ ಮಾರ್ಗದರ್ಶನದಿಂದ ಸರಿಯಾದ ದಿಕ್ಕಿನಲ್ಲಿ ಸಾಗುತ್ತವೆ. ಯಾವುದೇ ಅನುಭವ ಇರದ ಗುರುತ್ವದ ಮಹತ್ವವು ಗೊತ್ತಿರದ ವ್ಯಕ್ತಿಯು ಹಾಗೂ ಭವಿಯಾದವನು– ಇಬ್ಬರೂ ಅನನುಭವಿಗಳು (ಉಭಯ ಭ್ರಷ್ಟರು). ಇಂಥವರನ್ನು ಭಗವಂತನು ಮೆಚ್ಚುವುದಿಲ್ಲ ಎನ್ನುವುದು ಈ ಮೇಲಿನ ವಚನದ ತಾತ್ಪರ್ಯವಾಗಿದೆ. ಗುರುವಿನ ಮಾತು ನಿತ್ಯವೂ ಆಲಿಸೋಣ; ಅವರ ಮಾರ್ಗದರ್ಶನದಲ್ಲಿ ಸಾಗೋಣ.