ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ | ಭವಸಾಗರದ ಬಲೆಯಲ್ಲಿ ನರಳಬೇಡಿ: ಡಾ.ಅಲ್ಲಮಪ್ರಭು ಸ್ವಾಮೀಜಿ

Last Updated 26 ಜನವರಿ 2022, 19:30 IST
ಅಕ್ಷರ ಗಾತ್ರ

ಅಕಟಕಟಾ, ಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ!

ಅಕಟಕಟಾ, ಶಿವ ನಿನಗಿನಿತು ಕೃಪೆಯಿಲ್ಲ!

ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ?

ಏಕೆ ಹುಟ್ಟಿಸಿದೆ ಪರಲೋಕದೂರನ?

ಏಕೆ ಹುಟ್ಟಿಸಿದೆ, ಕೂಡಲಸಂಗಮದೇವ ಕೇಳಯ್ಯಾ

ಎನಗಾಗಿ ಮತ್ತೊಂದು ತರುಮರನಿಲ್ಲವೆ?

ಭಗವಂತನು ಸೃಷ್ಟಿಸಿರುವ ಈ ಪ್ರಪಂಚದಲ್ಲಿ ಬುದ್ಧಿವಂತ ಪ್ರಾಣಿ ಎಂದರೆ ಅದು ಮನುಷ್ಯ ಪ್ರಾಣಿಯೊಂದೆ. ಸಕಲವನ್ನು, ಸರ್ವಸ್ವವನ್ನೂ ಅರಿಯುವ ವಿಶಿಷ್ಟ ವಿವೇಚನಾ ಶಕ್ತಿಯನ್ನು ಆತ ಪಡೆದಿದ್ದಾನೆ. ಅಂತಹ ಬುದ್ಧಿವಂತನಾದ ಮಾನವನು ಸುಖ-ದುಃಖಗಳನ್ನು ಅನುಭವಿಸುತ್ತಾನೆ. ಕಷ್ಟ-ನಷ್ಟಗಳನ್ನು ಕಾಣುತ್ತಾನೆ. ಅನುಭವಿಸುತ್ತಾನೆ. ನೋವು-ನಲಿವುಗಳನ್ನು ಅನುಭವಿಸುತ್ತಾನೆ. ಭಗವಂತನ ಅನುಗ್ರಹವನ್ನು ಪಡೆಯುವ ಶಕ್ತಿ ಮಾನವನಿಗೆ ಮಾತ್ರ ಇದೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ಆತ ನಡೆದುಕೊಳ್ಳುವುದರಿಂದ ಭವಸಾಗರದ ಬಲೆಯಲ್ಲಿ ಬಿದ್ದು ನರಳಾಡುತ್ತಾನೆ. ಈ ಲೋಕದಲ್ಲಿ ದುಃಖಿಯನ್ನಾಗಿ ಹುಟ್ಟಿಸುವ ಬದಲು ಗಿಡಮರಾದಿ (ತರುಮರಾದಿ)ಗಳನ್ನಾಗಿ ಹುಟ್ಟಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬಸವಣ್ಣನವರು ಈ ವಚನದ ಮೂಲಕ ಭಗವಂತನಲ್ಲಿ ಮೊರೆ ಇಟ್ಟಿದ್ದಾರೆ.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT