ಪೃಥ್ವಿಯೊಳಗೆ ನವಖಂಡಗಳು, ನವಸಕೀಲಗಳು, ನವಗ್ರಹಗಳು ಮತ್ತು ನವರತ್ನಗಳು ಇರುವ ಹಾಗೆ ಮನುಷ್ಯನಿಗೆ ಒಂಬತ್ತು ದ್ವಾರಗಳಿವೆ. ಮನೆಯಲ್ಲಿ ಗಿಳಿ ಸಾಕಬೇಕಾದರೆ ಅದು ಹಾರಿ ಹೋಗಬಾರದೆಂದು ಪಂಜರನ್ನು ತಯಾರಿಸಿ ಅದರಲ್ಲಿ ಇರಿಸುತ್ತೇವೆ. ಶರೀರಕ್ಕೆ ಒಂಬತ್ತು ಬಾಗಿಲಗಳಿದ್ದರೂ, ಅವು ಸದಾ ತೆರೆದೇ ಇದ್ದರೂ ಜೀವವೆಂಬ ಗಿಳಿ ಹಾರಿ ಹೋಗಿಲ್ಲ. ಅದು ಹಾರಿ ಹೋಗುವಾಗ ತಡೆದು ನಿಲ್ಲಿಸುವವರು ಇನ್ನೂ ಹುಟ್ಟಿಲ್ಲ.