‘ವಚನಗಳು ಧಾರ್ಮಿಕ ಜಗತ್ತಿಗೆ ಸೀಮಿತಗೊಳ್ಳದೇ ಮನುಷ್ಯನ ಸಮಗ್ರ ಬೆಳವಣಿಗೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ನೈತಿಕ ಹೀಗೆ ಹತ್ತಾರು ವಿಷಯಗಳ ಬಗ್ಗೆಯೂ ಸಂದೇಶ ನೀಡಿವೆ. ಅಂದಿನ ಕಾಲದಲ್ಲೇ ಬಸವಣ್ಣನವರು ಸ್ತ್ರೀ ಸಬಲೀಕರಣಕ್ಕೆ ನಾಂದಿ ಹಾಡಿದರು. ಸಕಲ ಜೀವಾತ್ಮರಿಗೆ ಲೇಸು ಬಯಸುವವನೇ ಶರಣ ಎನ್ನುವ ಮೂಲಕ ಎಲ್ಲರನ್ನೂ ಪ್ರೀತಿಸುವ ಸೂತ್ರವನ್ನು ತೆರೆದಿಟ್ಟರು. ಇಷ್ಟಲಿಂಗವೆಂಬ ಜಾತಿ ರಹಿತ ಹೊಸ ಜ್ಯೋತಿಯ ಮೂಲಕ ಮಾನವರನ್ನು ಪಾವನಗೊಳಿಸಿದರು. ಕಾಯಕ, ದಾಸೋಹ ಮತ್ತು ಪ್ರಸಾದ ತತ್ವಗಳ ಮೂಲಕ ಗಳಿಕೆ ಮತ್ತು ಖರ್ಚಿಗೆ ಹೊಸ ಆಯಾಮ ನೀಡಿದರು’ ಎಂದು ಸ್ಮರಿಸಿದರು.