‘ಗ್ರಾಮೀಣ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಹೇಗೆ ಸಂಘಟನೆ ಮಾಡಿದ್ದೆವು ಎನ್ನುವುದನ್ನು ನೋಡಿದ್ದೀರಿ. ಅವರು (ಲಕ್ಷ್ಮಿ ಹೆಬ್ಬಾಳಕರ) ಹೇಗೆ ಶಾಸಕಿಯಾದರು ಮತ್ತು ಹೇಗೆ ತಯಾರಿ ಮಾಡಿದ್ದೆವು ಎನ್ನುವುದು ಗೊತ್ತಿದೆ. ಆದರೆ, ಗೆದ್ದ ನಂತರ ಬೇರೆ ರೂಪ ಪಡೆದಿದೆ. ಆ ಶಾಸಕಿ ಬಗ್ಗೆ ಮಾತನಾಡಬೇಡಿ ಎಂದು ಪಕ್ಷದವರು ಎಚ್ಚರಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಆದರೆ, ಅಲ್ಲಿ ನಮ್ಮ ಪಕ್ಷದವರನ್ನು ಶಾಸಕರನ್ನಾಗಿ ಮಾಡಲು ಶ್ರಮಿಸುತ್ತೇವೆ. ಕ್ಷೇತ್ರದ ಮುಖಂಡ ಯುವರಾಜ ಕದಂ ನಮ್ಮೊಂದಿಗೆ ಇದ್ದರು. ಆದರೆ, ಯಾವ ಪಕ್ಷಕ್ಕೆ ಹೋಗುತ್ತಾರೆಯೋ ಅವರ ವೈಯಕ್ತಿಕ ವಿಚಾರ’ ಎಂದು ಪ್ರತಿಕ್ರಿಯಿಸಿದರು.