‘ಕೃಷಿ ಅರಣ್ಯ ಯೋಜನೆ ಅಡಿಯಲ್ಲಿ ರೈತರಿಗೆ ತಪಸಿ, ಬೇವು, ರೇನ್ಟ್ರೀ, ಮಾವು, ಅರಳಿ, ಹೊಂಗೆ, ನೇರಳೆ, ಹುಣಸೆ, ಬಸರಿ, ಪೇರಲ, ನಿಂಬೆ, ಸೀತಾಫಲ, ಕರಿಬೇವು, ಬಿದಿರು, ಬನ್ನಿ, ಸಾಗವಾನಿ ಮೊದಲಾದ ಸಸಿಗಳನ್ನು ಇಲಾಖೆಯಿಂದ ವಿತರಿಸಲಾಗುವುದು. ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗಿಡಗಳನ್ನು ನಾಶ ಮಾಡದೇ ಅವುಗಳನ್ನು ಉಳಿಸಿ–ಬೆಳೆಸಬೇಕು. ಈ ಕಾರ್ಯದಲ್ಲಿ ಎಲ್ಲರ ಸಹಕಾರ ಅವಶ್ಯ’ ಎಂದು ಕೋರಿದರು.