ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೈಸರ್ಗಿಕ ಸಂಪನ್ಮೂಲ ಮುಂದಿನ ಪೀಳಿಗೆಗೂ ಉಳಿಸಬೇಕು’

Last Updated 9 ಜುಲೈ 2019, 14:04 IST
ಅಕ್ಷರ ಗಾತ್ರ

ಅಥಣಿ: ‘ಈ ಭೂಮಿ ನಮಗೆ ಸಿಕ್ಕ ವರದಾನವಲ್ಲ. ಮುಂದಿನ ಪೀಳಿಗೆಗೆ ಕೊಡಬೇಕಾದ ಕಾಣಿಕೆಯಾಗಿದೆ. ಇದಕ್ಕಾಗಿ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕು’ ಎಂದು ಶಿಕ್ಷಕಿ ಪ್ರಿಯಂವದಾ ಅಣೆಪ್ಪನವರ ಹೇಳಿದರು.

ಸಹಾಯ ಪ್ರತಿಷ್ಠಾನ ಹಾಗೂ ಅರಣ್ಯ ಇಲಾಖೆ ವತಿಯಿಂದ ಇಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಅವರು ಉದ್ಘಾಟಿಸಿದರು.

‘ನೆಲ, ಜಲ ಹಾಗೂ ಸಂಸ್ಕೃತಿಯನ್ನು ಉಳಿಸಿ–ಬೆಳೆಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ಮುಖಂಡ ಸುಭಾಸ ಮಾಳಿ, ಅರಣ್ಯ ಇಲಾಖೆ ಸಿಬ್ಬಂದಿ ರಾಯಪ್ಪ ಬಬಲಿ, ಅಧ್ಯಕ್ಷತೆ ವಹಿಸಿದ್ದ ಸಹಾಯ ಪ್ರತಿಷ್ಠಾನದ ಸಂತೋಷ ಬಡಕಂಬಿ, ಮುಖಂಡ ತೌಸಿಫ್‌ ಸಾಂಗಲೀಕರ, ರವಿ ಬಡಕಂಬಿ ಹಾಗೂ ಸಚಿನ ಅವಟಿ ಮಾತನಾಡಿದರು.

ಮುಖಂಡರಾದ ಪ್ರಶಾಂತ ಮಾಳಿ, ಶಶಿಧರ, ಶ್ರದ್ಧಾ ಐಗಳಿ, ಅಶ್ವಿನಿ ಪೂಜಾರಿ, ಸುಜಾತಾ ಹಿರೇಮಠ, ಅಶ್ವಿನಿ ಹೂರಣಗಿ, ಜ್ಯೋತಿಬಾ ಭೋಸಲೆ, ರಾಜೇಶ್ವರಿ ಮುಳ್ಳಟ್ಟಿ, ಮೇಘಾ ದಡ್ಡನ್ನವರ, ಪೂಜಾ ಕೌಜಲಗಿ, ಅಭಿಷೇಕ ಚವಾಣ, ಸೌರಭ ಬೋರಾಡೆ, ಅಖಿಲೇಶ ಬೆಳವೀಕರ, ಪೂಜಾ ಕಲಚಿಮ್ಮಡ, ರೇಣುಕಾ ಅಂಕಲಗಿ, ಶೈಲಜಾ ಬಿರಾದಾರ, ಸ್ವಾತಿ ಮರಾಠೆ, ಅಕ್ಷತಾ ಅಥಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT