‘ಸಹೋದರ ರಮೇಶಗೆ ಕೋವಿಡ್–19 ದೃಢಪಟ್ಟಿದ್ದು, ಸದ್ಯ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಗೆಟಿವ್ ವರದಿ ಬಂದರೆ ಅವರೂ ಖಂಡಿತ ಪ್ರಚಾರ ನಡೆಸುತ್ತಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದಲ್ಲಿ ಪ್ರಚಾರ ನಡೆಸಿದರೆ ಅವರೊಂದಿಗೆ ಭಾಗವಹಿಸುತ್ತೇವೆ. ಏ. 13ರಂದು 10 ಹಳ್ಳಿಗಳಲ್ಲಿ ಮತ ಯಾಚಿಸುತ್ತೇನೆ. ಬಿಜೆಪಿಯು ಖಂಡಿತ ಗೆಲವು ಸಾಧಿಸುತ್ತದೆ’ ಎಂದು ಹೇಳಿದರು.