ಬಸ್ ನಿಲ್ದಾಣದಿಂದ ಇಬ್ಬರೂ ಯುವಕರು ಚನ್ನಮ್ಮ ವೃತ್ತದ ಕಡೆಗೆ ಹೊರಟಿದ್ದರು. ಆರ್.ಟಿ.ಒ ಕಚೇರಿ ದಾಟಿ ತುಸು ದೂರ ಬಂದು ರಾಯಣ್ಣ ಸರ್ಕಲ್ ಮೂಲಕ ಹೊರಟಿದ್ದರು. ಅದೇ ಸಮಯಕ್ಕೆ ವೃತ್ತದಲ್ಲಿನ ಮರ ಬುಡಸಮೇತ ಉರುಳಿಬಿತ್ತು. ಕೊಂಬೆಗಳ ಅಡಿ ಸಿಲುಕಿದ ಯುವಕರನ್ನು ರಕ್ಷಿಸಲು ಜನ ಇನ್ನಿಲ್ಲದ ಯತ್ನ ಮಾಡಿದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮರದ ಕೊಂಬೆ ಕತ್ತರಿಸಿ ತೆರವು ಮಾಡಿದರು.