ರಸ್ತೆಯಲ್ಲಿ ತ್ಯಾಜ್ಯ: ನಗರದ ಐತಿಹಾಸಿಕ ಗೋಳಗುಮ್ಮಟ ಎದುರಿನ ಬೃಹತ್ ಬೇವಿನ ಮರ, ಜಿಲ್ಲಾಧಿಕಾರಿ ಕಚೇರಿ ಆವ
ರಣದಲ್ಲಿನ ಹಲ ಗಿಡಗಳು, ರಂಭಾಪೂರ ಬಡಾವಣೆಯಲ್ಲಿ ಹತ್ತಾರು ಗಿಡ-ಮರಗಳು, ಗಾಂಧಿಚೌಕ್ ಪೊಲೀಸ್ ಠಾಣೆ
ಯಲ್ಲಿನ ಬೃಹತ್ ಗಿಡಗಳು, ಇಬ್ರಾಹಿಂ ಪೂರ, ಕೀರ್ತಿನಗರ, ಬಡಿಕಮಾನ ಸೇರಿದಂತೆ ಹತ್ತಾರು ಕಡೆಗಳಲ್ಲಿ ಅಸಂಖ್ಯ ಗಿಡಮರಗಳು, ಟೊಂಗೆಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಂಭಾಗದಲ್ಲಿರುವ ವಿದ್ಯುತ್ ಕಂಬ ನೆಲಕ್ಕುರ
ಳಿವೆ. ಇದರಿಂದ ನಗರದ ಯಾವುದೇ ರಸ್ತೆ ಅಥವಾ ಬಡಾವಣೆಗಳಲ್ಲಿ ಸಂಚರಿಸಿದರೂ ನೆಲಕ್ಕುರುಳಿದ ಗಿಡಮರ, ವಿದ್ಯುತ ಕಂಬ, ರಸ್ತೆಯಲ್ಲಿ ತ್ಯಾಜ್ಯವಸ್ತುಗಳು ಗೋಚರಿಸುತ್ತಿದ್ದವು.