ಹೊಸಪೇಟೆ: ’ಪವರ್ಮ್ಯಾನ್ಗಳು ಎಚ್ಚರ ಹಾಗೂ ಸೂಕ್ಷ್ಮ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಪ್ರಾಣಕ್ಕೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ‘ ಎಂದು ಜೆಸ್ಕಾಂ ಉಪ ನಿಯಂತ್ರಣಾಧಿಕಾರಿ ಹೊನ್ನೂರಪ್ಪ ಹೇಳಿದರು.
ಜೆಸ್ಕಾಂ ಹಾಗೂ ನೌಕರರ ಸಂಘದ ಸಹಭಾಗಿತ್ವದಲ್ಲಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
’ಪವರ್ಮ್ಯಾನ್ಗಳು ಕಂಬ ಹತ್ತುವುದಕ್ಕಿಂತ ಮುಂಚೆ ಎಲ್ಲ ರೀತಿಯಿಂದಲೂ ಪರಿಶೀಲನೆ ನಡೆಸಿಯೇ ಹತ್ತಬೇಕು. ಟ್ರಾನ್ಸಫಾರ್ಮರ್ನಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ನಂತರವೇ ದುರಸ್ತಿ ಕೆಲಸ ಮಾಡಬೇಕು. ಅದರಲ್ಲೂ ಮಳೆಗಾಲದಲ್ಲಿ ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮುಂಜಾಗರೂಕತೆ ವಹಿಸಿದರೆ ದೊಡ್ಡ ಅವಘಡ ತಪ್ಪಿಸಬಹುದು‘ ಎಂದು ತಿಳಿಸಿದರು.
ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಮೇಟಿ ಹನುಮಂತಪ್ಪ, ಲೆಕ್ಕಪತ್ರ ಅಧಿಕಾರಿ ಡಿ.ಟಿ. ಹಳ್ಳಿ, ಹಗರಿಬೊಮ್ಮನಹಳ್ಳಿ ಜೆಸ್ಕಾಂ ಘಟಕದ ಕಾರ್ಯನಿರ್ವಾಹಕ ಎಂಜಿನಿಯರ್ ತೇಜ ನಾಯ್ಕ, ಕಲಬುರ್ಗಿ ವಿಭಾಗ ಮಟ್ಟದ ನೌಕರರ ಸಂಘದ ಉಪಾಧ್ಯಕ್ಷ ಹನುಮಂತಪ್ಪ ಇದ್ದರು.