ಹೊಸಪೇಟೆ: ‘ಅಹಿಂದ ವರ್ಗಗಳು ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿದ್ದಾರೆ. ಆದರೆ, ರಾಜಕೀಯ, ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ. ಈ ವರ್ಗಗಳಿಗೆ ಎಲ್ಲ ರೀತಿಯ ಸವಲತ್ತು ಸಿಕ್ಕು ಮುಖ್ಯ ವಾಹಿನಿಗೆ ಬರಬೇಕು’ ಅಹಿಂದ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಳಿ ತಿಳಿಸಿದರು.
ನಗರದಲ್ಲಿ ಭಾನುವಾರ ನಡೆದ ವೇದಿಕೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
‘ರಾಜಕೀಯ ಅಧಿಕಾರ ಇಲ್ಲದೆ ಏನೂ ಮಾಡಲು ಆಗುವುದಿಲ್ಲ. ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಮುಂಬರುವ ನಗರಸಭೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅಹಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲಬೇಕು’ ಎಂದು ತಿಳಿಸಿದರು.
ನಗರಸಭೆಯ ಮಾಜಿ ಸದಸ್ಯ ಕೆ.ಗೌಸ್ ಮಾತನಾಡಿ, ‘ಅಹಿಂದ ಯುವವೇದಿಕೆಯು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅಹಿಂದ ವರ್ಗದಿಂದ ಯುವಕರು ರಾಜಕೀಯಕ್ಕೆ ಬಂದರೆ ಅದರಿಂದ ಉಪಯೋಗವಾಗುವುದು’ ಎಂದರು.
ಇದೇ ವೇಳೆ ಅಹಿಂದ ಯುವ ವೇದಿಕೆ ನಗರದ ಘಟಕದ ಹೊಸ ಅಧ್ಯಕ್ಷರಾಗಿ ವೈ. ಲಕ್ಷ್ಮೀಪತಿ ಅವರನ್ನು ಆಯ್ಕೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ರಾಮಲಿ ಕಾಕುಬಾಳು, ಕೇಶವ, ಗೆಲುವಪ್ಪ, ದೇವರಾಜ್ ಚೌಕಿ, ಖಾದರ್ ಬಾಷ, ನಾಗರಾಜ್ ಬಿ. ಹುಲುಗಪ್ಪ, ಮೇಟಿ ಹನುಮಂತಪ್ಪ, ಇಂಗಳಗಿ ದ್ಯಾಮಣ್ಣ, ಉದಯ, ನೂರ್ ಬಾಷ, ಮಾ ಬಾಷ, ಸಿ.ಕೊಟ್ರೇಶ್, ಯುವರಾಜ್, ಪಂಪಣ್ಣ, ಕೆ.ರಾಘವೇಂದ್ರ ಇದ್ದರು.