‘ಅಲ್ಲಿಗೂ ಬಂದ ಆನಂದ್ ಸಿಂಗ್ ಕೈಯಲ್ಲಿ ಹೂಕುಂಡ ಹಿಡಿದುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಬಲವಂತವಾಗಿ ನನ್ನನ್ನು ಶಾಸಕ ಭೀಮಾ ನಾಯ್ಕ ಅವರ ರೂಂಗೆ ಕರೆದುಕೊಂಡು ಹೋದರು. ಈ ವೇಳೆ ಭೀಮಾ ನಾಯ್ಕನನ್ನು ನಿಂದಿಸಿ, ಹಲ್ಲೆ ನಡೆಸಲು ಮುಂದಾದಾಗ ನಾನು ಮಧ್ಯ ಪ್ರವೇಶಿಸಿ ಸಮಾಧಾನಗೊಳಿಸಲು ಯತ್ನಿಸಿದೆ. ಆಗ ನನ್ನ ಕುಟುಂಬ ಸದಸ್ಯರಿಗೆ ಬೈಯ್ದು ಜಾತಿ ನಿಂದನೆ ಮಾಡಿದರು. ನಂತರ ನನ್ನ ಮೇಲೆ ಹಲ್ಲೆ ನಡೆಸಿದರು. ನಂತರ ನಾನು ಅವರ ಮೇಲೆ ಕೈಯ ಮಾಡಿದೆ. ಅದಕ್ಕೆ ಭೀಮಾ ನಾಯ್ಕ, ವಿಶ್ವ ಹಾಗೂ ಶರಣಪ್ಪ ಅವರು ಸಾಕ್ಷಿ’ ಎಂದು ಹೇಳಿಕೊಂಡಿದ್ದಾರೆ.