ಸುಳ್ಯದ ಬಿಜೆಪಿ ನಾಯಕ ಜಯರಾಮ ಹಾಡಿಕಲ್ಲು ಅವರಿಗೆ ಸೇರಿದ ರಬ್ಬರ್ ತೋಟದ ಶೆಡ್ಡಿಗೆ ಬಂದ ಇಬ್ಬರು ಯುವತಿಯರು ಮತ್ತು ಒಬ್ಬ ಪುರುಷ, ಅಲ್ಲಿದ್ದ ಥಾಮಸ್ ಅವರಿಂದ ಅನ್ನ, ಮೊಟ್ಟೆ ಪಡೆದು, ಊಟ ಮಾಡಿ ಅಲ್ಲಿಂದ ತೆರಳಿದ್ದಾರೆ. ಅವರ ಕೈಯಲ್ಲಿ ಬಂದೂಕು ಇತ್ತು. ಜಯರಾಮ ಅವರ ಮನೆ ಸಮೀಪ ಈ ಶೆಡ್ ಇದೆ. ಬಂದ ಶಂಕಿತರು ತೆಲುಗಿನಲ್ಲಿ ಪರಸ್ಪರ ಮಾತನಾಡುತ್ತಿದ್ದರು.