75 ಎಕರೆಗೂ ಹೆಚ್ಚು ಪ್ರದೇಶವನ್ನು ಕೃಷಿ ಚಟುವಟಿಕೆಗೆ ಕೆಲ ರೈತರು ಒತ್ತುವರಿ ಮಾಡಿದ್ದಾರೆ. ಈಚೆಗೆ ಕಂದಾಯ ಇಲಾಖೆಯ ನಿರ್ದೇಶನದಂತೆ ಭೂಮಾಪನ ಇಲಾಖೆಯಿಂದ ಕೆರೆಯ ಗಡಿ ಗುರುತಿಸುವ ಕೆಲಸ ನಡೆಯಿತು. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ‘ಈ ಕುರಿತು ಪ್ರಶ್ನಿಸಿದರೆ ಸಮಂಜಸವಾದ ಕಾರಣ ನೀಡುತ್ತಿಲ್ಲ’ ಎನ್ನುತ್ತಾರೆ ಯುವ ಬ್ರಿಗೇಡ್ ಸದಸ್ಯರು.