ಉಪನ್ಯಾಸಕ ಸಿದ್ದರಾಮ ಹಿರೇಮಠ ಹಾಗೂ ವಿದ್ಯಾ ಅವರ ಪುತ್ರಿಯಾದ ಅಪೂರ್ವ ಹಿರೇಮಠ, ಸದ್ಯ ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಧಾರವಾಡದ ಸಾಗರ ಹಿರೇಮಠರೊಂದಿಗೆ ವಿವಾಹವಾಗುತ್ತು. ‘ವಿದ್ಯಾಭ್ಯಾಸದ ಮಧ್ಯೆ ಒಂದೆರಡು ಚುನಾವಣೆಗಳಲ್ಲಿ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ನನ್ನ ಹಕ್ಕಿನಿಂದ ವಂಚಿತರಾಗದೇ ಮತ ಚಲಾಯಿಸಬೇಕು’ ಎಂಬ ಸಂಕಲ್ಪದೊಂದಿಗೆ ಮತದಾನ ಮಾಡಿದ್ದಾರೆ.