ಈ ಅನುಕರಣೀಯ ಕಾರ್ಯದಲ್ಲೊಂದು ಕಿವಿಮಾತು: ಊರು– ನಗರಗಳಲ್ಲಿ ವಾಸಿಸುವ ಪಕ್ಷಿಗಳಿಗಿಂತ ಕಾಡು– ಹೊಲಗಳಲ್ಲಿ ವಾಸಿಸುವ, ಮಾನವರ ಹತ್ತಿರವೂ ಸುಳಿಯದ ಪ್ರಾಣಿ–ಪಕ್ಷಿಗಳಿಗೆ ನೀರಿನ ಅಭಾವ ಕಾಡುವುದು ಹೆಚ್ಚು. ಹಾಗಾಗಿ ಕಾಡು– ಹೊಲಗಳ ಬಳಿ ನೀರು, ಆಹಾರದ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲದೆ, ಒಡೆದ ಮಡಕೆ, ಮುರಿದ ಬಕೆಟ್, ಪ್ಲಾಸ್ಟಿಕ್ ಲೋಟಗಳು, ಟೈರ್ಗಳು, ಬಳಸಿದ ಪೇಂಟ್ ಡಬ್ಬಗಳೂ ನೀರು–ಆಹಾರ ಇಡಲು ಯೋಗ್ಯವಾಗಿವೆ. ಆದ್ದರಿಂದ ಈ ಸರಳ ಕಾರ್ಯವನ್ನು ಪ್ರತಿಯೊಬ್ಬರೂ ಕೈಗೊಂಡು ಮೃಗ–ಖಗಗಳ ಜೀವ ಉಳಿಸಬಹುದಲ್ಲವೇ?