ತೋರಣಗಲ್ಲು: ಸಮೀಪದ ವೇಣಿವೀರಾಪುರ ಗ್ರಾಮದ ಬಳಿ ಸೋಮವಾರ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರರಾದ ಬಳ್ಳಾರಿಯ ಕೌಲ್ಲಬಜಾರನ ಆಶ್ರಯ ಕಾಲೊನಿಯ ಗೌಸ್ (24) ಹಾಗೂ ಹಿಂಬದಿ ಸವಾರ ಇಮ್ರಾನ್(25) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಬ್ದುಲ್(23) ಗಂಭೀರವಾಗಿ ಗಾಯಗೊಂಡಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕರು ಕುಡುತಿನಿಯಿಂದ ಬಳ್ಳಾರಿಯ ಕಡೆಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ ಎಂದು ಕುಡುತಿನಿ ಠಾಣೆ ಪೊಲೀಸರು ತಿಳಿಸಿದರು.