ಈ ಇಬ್ಬರೂ, ನಗರದ ಬಿಡಿಎಎ ಫುಟ್ಬಾಲ್ ಮೈದಾನ, ವಿಮ್ಸ್ ಮೈದಾನ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ನಂತರ, ಅಲ್ಲಿಪುರದ ಮಹದೇವ ತಾತನವರ ಮಠ, ಕಲ್ಯಾಣಸ್ವಾಮಿ ಮಠ, ಬಾಲಾಂಜನೇಯ ಸ್ವಾಮಿ ದೇವಸ್ಥಾನ, ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ವಕೀಲರ ಸಂಘದ ಮುಖಂಡರನ್ನೂ ಭೇಟಿ ಮಾಡಿ ಮತ ಯಾಚಿಸಿದರು.