ಇದಕ್ಕೂ ಮುನ್ನ ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದಲ್ಲಿ ಶಾಸಕ ಬಿ. ಶ್ರೀರಾಮುಲು, ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ವಿಶೇಷ ಪೂಜೆ ಸಲ್ಲಿಸಿದರು. ಮುಖಂಡರಾದ ಕವಿರಾಜ್ ಅರಸ್, ಮೃತ್ಯುಂಜಯ ಜಿನಗಾ, ಗುದ್ಲಿ ಪರಶುರಾಮ, ಸಾಲಿ ಸಿದ್ದಯ್ಯ ಸ್ವಾಮಿ, ಕಟಗಿ ರಾಮಕೃಷ್ಣ, ರಾಮಚಂದ್ರಗೌಡ ತೆರೆದ ವಾಹನದಲ್ಲಿ ನಿಂತು, ಜನರತ್ತ ಕೈ ಮುಗಿದು ಬೆಂಬಲಿಸುವಂತೆ ಕೋರಿದರು. ಮೆರವಣಿಗೆ ಹಾದು ಹೋಗುವ ವೇಳೆ ಜನ ಮುಖಂಡರ ಕೈಕುಲುಕಿ ಶುಭಾಶಯ ಕೋರಿದರು. ಯುವಕರು ಸೆಲ್ಫಿ ತೆಗೆದುಕೊಂಡರು.