ಹೊಸಪೇಟೆ: ಅಹಿಂದ ಯುವ ವೇದಿಕೆಯಿಂದ ಶನಿವಾರ ನಗರದ ಗಂಗಾ ಪರಮೇಶ್ವರಿ ವಿದ್ಯಾಸಂಸ್ಥೆ ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಬ್ಯಾಗ್ಗಳನ್ನು ವಿತರಿಸಲಾಯಿತು.
ಬ್ಯಾಗ್ ವಿತರಿಸಿದ ಬಳಿಕ ಮಾತನಾಡಿದ ವೇದಿಕೆಯ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಲಿ, ‘ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗೆ ಪ್ರತಿ ವರ್ಷ ನಮ್ಮ ವೇದಿಕೆಯಿಂದ ನೆರವು ನೀಡಲಾಗುತ್ತದೆ. ಈ ವರ್ಷ ಎಲ್ಲ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಗಿದೆ’ ಎಂದು ಹೇಳಿದರು.
ಶಾಲೆಯ ಮುಖ್ಯಶಿಕ್ಷಕಿ ಸರಳಾ, ಅಹಿಂದ ಯುವ ವೇದಿಕೆಯ ಗೌರವ ಅಧ್ಯಕ್ಷ ಆರ್.ಚೇತನ್ರಾಜ್ ಜೈನ್, ಉಪಾಧ್ಯಕ್ಷ ಗಂಗಾಧರ, ಕಾರ್ಯದರ್ಶಿ ಪಿ.ಬಸವರಾಜ್, ಖಜಾಂಚಿ ಸಿ.ಕೊಟ್ರೇಶ್, ಮುಖಂಡರಾದ ಕೇಶವ, ಖಾದರ್, ಪಂಪಣ್ಣ, ಎಚ್.ಶೇಷಾ, ಟಿ.ಹನುಮಂತ, ಎಂ. ಜಗನ್ನಾಥ, ಇಂಗಳಿಗಿ ದ್ಯಾಮಣ್ಣ, ಕೆ.ರಾಘವೇಂದ್ರ ಇದ್ದರು.