ಹೊಸಪೇಟೆ: ಇತ್ತೀಚೆಗೆ ಅನಾರೋಗ್ಯದಿಂದ ಮೃತರಾದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕದ ಸಹಾಯಕ ಕುಶಲ ಕರ್ಮಿ ಎಚ್. ಚಂದ್ರಶೇಖರ್ ಅವರ ಪತ್ನಿ ವಿಜಯಮಾಲಾ ಅವರಿಗೆ ಸಂಸ್ಥೆಯಿಂದ ಬುಧವಾರ ₹3 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.
ಸಂಸ್ಥೆಯ ಸಿಬ್ಬಂದಿ ಮೃತರಾದಲ್ಲಿ ಅವರ ಅವಲಂಬಿತರಿಗೆ ಸಂಸ್ಥೆಯು ಆಂತರಿಕ ಗುಂಪು ವಿಮೆ ಯೋಜನೆಯ ಅಡಿಯಲ್ಲಿ ಪರಿಹಾರ ವಿತರಿಸುತ್ತದೆ. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ಹಾಗೂ ಕಾರ್ಮಿಕ ಕಲ್ಯಾಣ ಅಧಿಕಾರಿ ಎ. ಸಂಜೀವಮೂರ್ತಿ ಅವರು ವಿಜಯಮಾಲಾ ಅವರಿಗೆ ಪರಿಹಾರದ ಚೆಕ್ ವಿತರಿಸಿದರು.