ಹೊಸಪೇಟೆ: ನರೇಂದ್ರ ಮೋದಿಯವರು ಸತತ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರಿಂದ ಅವರಿಗೆ ಶುಭ ಕೋರುವ ಚಿತ್ರ–ಲೇಖನಗಳನ್ನು ಸಂಸದ ವೈ. ದೇವೇಂದ್ರಪ್ಪ ಅವರಿಗೆ ಮಕ್ಕಳು ಭಾನುವಾರ ನಗರದಲ್ಲಿ ನಡೆದ ಸಮಾರಂಭದಲ್ಲಿ ನೀಡಿದರು.
250ಕ್ಕೂ ಹೆಚ್ಚು ಮಕ್ಕಳು ಚಿತ್ರ ಬಿಡಿಸಿ, ಮೋದಿ ಕುರಿತು ಲೇಖನ ಬರೆದರು. ‘ಮೋದಿಯವರು ಮಾಡುತ್ತಿರುವ ಕೆಲಸದ ಬಗ್ಗೆ ಮಕ್ಕಳಿಗೂ ಅರಿವಿದೆ. ಅವರು ಕೃತಜ್ಞತೆ ಸಲ್ಲಿಸುವ ಮೂಲಕ ಪ್ರಬುದ್ಧತೆ ತೋರುತ್ತಿದ್ದಾರೆ. ಇದು ಅವರ ಒಟ್ಟಾರೆ ಬೆಳವಣಿಗೆಗೂ ಅನುಕೂಲ’ ಎಂದು ದೇವೇಂದ್ರಪ್ಪ ಹೇಳಿದರು.
'ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ದೇಶದ ಅಭಿವೃದ್ಧಿ, ದೇಶ ಪ್ರೇಮ ಬೆಳೆಸಿಕೊಂಡಿರುವುದನ್ನು ದೊಡ್ಡವರು ನೋಡಿ ಕಲಿಯಬೇಕಾಗಿದೆ. ಈ ಮಕ್ಕಳು ಸಮಾಜಕ್ಕೆ ಮಾದರಿ’ ಎಂದು ಹೊಗಳಿದರು.
ಬಿಜೆಪಿ ಮುಖಂಡರಾದ ಅಶೋಕ್ ಜೀರೆ, ಅನಂತ ಪದ್ಮನಾಭ,ಚಂದ್ರಕಾಂತ ಕಾಮತ್,ಸಾಲಿ ಸಿದ್ದಯ್ಯ ಸ್ವಾಮಿ, ಗುಜ್ಜಲ್ ಶಿವರಾಮಪ್ಪ, ರಾಮಚಂದ್ರಗೌಡ ಇದ್ದರು.