ಹೊಸಪೇಟೆ: ತಾಲ್ಲೂಕಿನ ಹಂಪಿ ರಥಬೀದಿಯ ಮಗ್ಗುಲಲ್ಲಿರುವ ಸಾಲು ಮಂಟಪದ ಒಂದು ಭಾಗ ಭಾನುವಾರ ಭಾಗಶಃ ಕುಸಿದು ಬಿದ್ದಿದೆ.
ಎರಡು ವಾರಗಳಿಂದ ಸತತವಾಗಿ ಹಂಪಿ ಸುತ್ತಮುತ್ತ ಮಳೆ ಸುರಿಯುತ್ತಿದ್ದು, ಮಂಟಪ ಶಿಥಿಲಗೊಂಡು ಅದರ ಒಟ್ಟು ಹದಿನೆಂಟು ಕಲ್ಲುಗಳು ಉರುಳಿ ಬಿದ್ದಿವೆ. ವಿಷಯ ತಿಳಿದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ಅವರು ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
’ಪುರಾತನ ಮಂಟಪಗಳು ಮಳೆಗೆ ಶಿಥಿಲಗೊಂಡಿದ್ದು, ಭಾನುವಾರ ಹದಿನೆಂಟು ಕಂಬಗಳು ಉರುಳಿ ಬಿದ್ದಿವೆ. ಈ ಭಾಗದಲ್ಲಿ ಈಗಾಗಲೇ ಮಂಟಪಗಳ ಜೀರ್ಣೊದ್ಧಾರ ಕೆಲಸ ಪ್ರಗತಿಯಲ್ಲಿದ್ದು, ಬರುವ ದಿನಗಳಲ್ಲಿ ಇದನ್ನು ಕೂಡ ಜೀರ್ಣೋದ್ಧಾರಗೊಳಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ನಗರ ಹೊರವಲಯದ ಅನಂತಶಯನಗುಡಿ ಸಮೀಪ ಬಿಂಗಿ ನಾಗೇಂದ್ರಪ್ಪ ಎಂಬುವರ ಮನೆ ಭಾಗಶಃ ಕುಸಿದು ಬಿದ್ದಿದೆ.