ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೆ ಮಹಾದೇವಿಗೆ ಶ್ರದ್ಧಾಂಜಲಿ

Last Updated 15 ಮಾರ್ಚ್ 2019, 13:02 IST
ಅಕ್ಷರ ಗಾತ್ರ

ಹೊಸಪೇಟೆ: ಅನಾರೋಗ್ಯದಿಂದ ಲಿಂಗೈಕ್ಯರಾದ ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರಿಗೆ ಶುಕ್ರವಾರ ಇಲ್ಲಿನ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಸವ ಬಳಗದ ಅಧ್ಯಕ್ಷ ಬಸವಕಿರಣ ಸ್ವಾಮಿ ಮಾತನಾಡಿ, ‘ರಾಜ್ಯ ಸೇರಿದಂತೆ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ನವದೆಹಲಿ, ಅಮೆರಿಕದಲ್ಲಿ ಬಸವತತ್ವವನ್ನು ಪ್ರಸಾರ ಮಾಡಿದ ಕೀರ್ತಿ ಮಾತೆಯವರಿಗೆ ಸಲ್ಲುತ್ತದೆ. ಅವರ ಘನ ಕಾರ್ಯದಿಂದ ಲಿಂಗಾಯತ ಸಮಾಜದಲ್ಲಿ ದೊಡ್ಡ ಪ್ರಜ್ಞೆ ಮೂಡಿದೆ. ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮಾಜದ ಕಾರ್ಯದರ್ಶಿ ಕೆ. ರವಿಶಂಕರ್, ಬಸವ ಬಳಗದ ಉಪಾಧ್ಯಕ್ಷ ಮಧುರಚನ್ನಶಾಸ್ತ್ರಿ ಹಿರೇಮಠ್, ಬಸವ ಬಳಗದ ಸದಸ್ಯರಾರ ಬಸವರಾಜ್, ಮಹಾಂತ ರೆಡ್ಡಿ, ಗೌರಿಶ್ವರಪ್ಪ, ಶಾಂತಲಿಂಗಪ್ಪ, ಮಾವಿನಹಳ್ಳಿ ಬಸವರಾಜ್, ಮೀನಾಕ್ಷಿ ಜಂಗಮನಿ, ಸೌಭಾಗ್ಯ ಲಕ್ಷ್ಮಿ, ಲೋಕೇಶ್ ಅವರಾಧಿ, ಜಡಿಯಪ್ಪ, ಶಂಭು ಹಿರೇಮಠ್, ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಬಸವರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT