‘ನೋಡ್ರಿ ಸತತ ಬರಗಾಲದಿಂದ ಈ ಬಾರಿ ಸಕಾಲಕ್ಕೆ ಮಳೆಯಾಗಿದ್ದರಿಂದ ಊಟಕ್ಕೆ ಎರಡು ಎಕರೆಯಲ್ಲಿ ಜೋಳ ಬೆಳದ್ವಿ. ಆದ್ರ ಕೈಗ ಬಂದದ್ದು ಬರದಂಗೆ ಆಗೈತಿ. ಹಿಂಗಾದ್ರ ಹೆಂಗ ರೈತರು ಜೀವನ ಸಾಗಿಸೋದು’ ಎಂದು ಮರಿಯಮ್ಮನಹಳ್ಳಿ ತಾಂಡಾದ ಜೋಳ ಬೆಳೆದ ರೈತರಾದ ಹೇಮ್ಲನಾಯ್ಕ, ರಾಮಾಂಜಿನಾಯ್ಕ, ವಾಲಿಬಾಯಿ, ಗೂಗಿಬಾಯಿ, ಭೀಮಾನಾಯ್ಕ, ಲಕ್ಷ್ಮಣನಾಯ್ಕ ಪ್ರಶ್ನಿಸುತ್ತಾರೆ.