ಬಳ್ಳಾರಿ: ಇಲ್ಲಿನವಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದ ನಗರದ ಕಪ್ಪಗಲ್ಲು ನಿವಾಸಿ ವೃದ್ಧೆಗೆ (82) ಕೊರೊನ ಸೋಂಕು ತಗುಲಿದ್ದು, ತಡವಾಗಿ ಬಂದ ವರದಿಯಿಂದ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಜೂನ್ 17 ರಂದು ವೃದ್ಧೆ ಆಸ್ಪತ್ರೆಗೆ ದಾಖಲಾಗಿದ್ದರು. 22 ರಂದು ಬೆಳಿಗ್ಗೆ 7 ರ ಸುಮಾರಿಗೆ ಮೃತಪಟ್ಟರು. ಅದಕ್ಕೂ ಮುನ್ನ ಅವರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ವರದಿಯು ವೃದ್ಧೆಯು ಸಾವಿನ ಬಳಿಕ, ಮಂಗಳವಾರ ದೊರಕಿದೆ ಎಂದಿದ್ದಾರೆ.