ನಗರದ ಉಕ್ಕಡಕೇರಿ, ಚಿತ್ರಕೇರಿ, ಬಾಣದಕೇರಿ ಸೇರಿದಂತೆ ಇತರೆ ಕಡೆಗಳಲ್ಲಿ ಮನೆ ಮನೆಗೆ ತೆರಳಿ, ‘ಲಾಕ್ಡೌನ್ ಇರುವುದರಿಂದ ಯಾರೂ ಕೂಡ ಅನಗತ್ಯವಾಗಿ ಹೊರಗೆ ಓಡಾಡಬಾರದು. ಅನೇಕ ಜನ ಕ್ವಾರಂಟೈನ್ನಲ್ಲಿದ್ದಾರೆ. ಆ ಅವಧಿ ಮುಗಿಯುವವರೆಗೆ ಮನೆಯಿಂದ ಹೊರಗೆ ಬರದಿರುವುದು ಉತ್ತಮ. ಯಾರಿಗಾದರೂ ಒಬ್ಬರಿಗೆ ಸೋಂಕು ತಗುಲಿದರೆ ಮನೆ ಮಂದಿ, ಸುತ್ತಮುತ್ತಲಿನವರು ತಗುಲಬಹುದು’ ಎಂದು ಹೇಳಿದರು.