ಬಳಿಕ ‘ಹಂಪಿ ಅವಲೋಕನ’ ವಿಚಾರ ಸಂಕಿರಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಚಲುವರಾಜು, ಎಸ್.ವೈ. ಸೋಮಶೇಖರ್, ಅಮರೇಶ್ ಯತಗಲ್ ಮಾತನಾಡುವರು. ನಂತರ ನೃತ್ಯ, ಸಂಗೀತ, ಕಂಸಾಳೆ ಕುಣಿತ, ಭರತನಾಟ್ಯ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 6.30ಕ್ಕೆ ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ವಿದ್ಯಾರ್ಥಿಗಳು ಬಡಗುತಿಟ್ಟು ಯಕ್ಷಗಾನ ನಡೆಸಿಕೊಡುವರು.