ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಅರ್ಜಿಗಳ ವಿಲೇವಾರಿ ವಿಳಂಬವಾಗಲು ಅರ್ಜಿದಾರರು ಸೂಕ್ತ ದಾಖಲೆಗಳನ್ನು ಸಲ್ಲಿಸದೇ ಇರುವುದೂ ಒಂದು ಕಾರಣ, ಅದರಲ್ಲೂ ಆಧಾರ್ ಕಾರ್ಡ್ ದೊರಕದೇ ಇರುವುದು ಮುಖ್ಯ ಸಮಸ್ಯೆ. ಅಂಥವನ್ನು ಹೊರತುಪಡಿಸಿದರೆ, ಜಿಲ್ಲೆಯಲ್ಲಿ ಅರ್ಜಿಗಳ ವಿಲೇವಾರಿ ಮುಗಿಯಬೇಕಿತ್ತು. ಈಗ ಆ ಕೆಲಸವನ್ನು ಚುರುಕಾಗಿ ಮುಗಿಸುತ್ತೇವೆ’ ಎಂದು ಹೇಳಿದರು.