‘2015ರ ಫೆಬ್ರುವರಿಯಲ್ಲಿ ನಮ್ಮ ಮನೆಯ ಬಾಡಿಗೆದಾರರ ಮೂಲಕ ಸೋಮಣ್ಣನ ಪರಿಚಯವಾಗಿತ್ತು. ಆತನನ್ನು ನಂಬಿದ್ದ ನಾವು, ಚಿನ್ನಾಭರಣ ಹಾಗೂ ಮನೆ ಅಡವಿಟ್ಟು ₹62 ಲಕ್ಷ ನೀಡಿದ್ದೆವು. ವರ್ಷ ಕಳೆದರೂ ಆರೋಪಿಯು ನಿವೇಶನ ಕೊಡಿಸಿರಲಿಲ್ಲ. ಅದನ್ನು ಕೇಳಲೆಂದು ನನ್ನ ಪತ್ನಿಯೊಂದಿಗೆ 2016ರಲ್ಲಿ ಸಹಕಾರ ನಗರದಲ್ಲಿರುವ ಆರೋಪಿಯ ಮನೆಗೆ ಹೋಗಿದ್ದೆ. ಅವಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿ, ಗನ್ ತೋರಿಸಿ ಕೊಲೆ ಬೆದರಿಕೆ ಒಡ್ಡಿದ್ದ’ ಎಂದು ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.