‘ಬೆಳಿಗ್ಗೆ ಚಿತ್ತವಾಡ್ಗಿ ಬಳಿ ರೈಲು ಹಳಿ ಮೇಲೆ ತಲೆ ಇಟ್ಟು ಜೀವ ಬಿಡಲು ವೀರಾರೆಡ್ಡಿ ಮುಂದಾಗಿದ್ದರು. ಅದನ್ನು ಗಮನಿಸಿದ ಸ್ಥಳೀಯ ಯುವಕರು, ಅವರ ಜೀವ ಉಳಿಸಿದ್ದರು. ಮಧ್ಯಾಹ್ನ ನಗರದ ರೋಟರಿ ವೃತ್ತದ ಸಿಗ್ನಲ್ ಬಳಿ ಬಸ್ ನಿಂತಿತ್ತು. ಸಿಗ್ನಲ್ ಬಿಟ್ಟ ನಂತರ ಬಸ್ ಹೊರಡಲು ಮುಂದಾದಾಗ, ಚಕ್ರದಡಿ ತಲೆ ಕೊಟ್ಟು ಜೀವ ಬಿಟ್ಟಿದ್ದಾನೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.