ಗಿರಿಜನರಿಗೆ ಕಲ್ಪಿಸಿರುವ ಕಾಲೊನಿಯಲ್ಲಿ ಬದುಕಲಾಗದ ರೀತಿ ಮನೆ ನಿರ್ಮಿಸಲಾಗಿದೆ. ಕುಡಿಯಲು ನೀರು ಇಲ್ಲ. ಮೂಲ ಸವಲತ್ತುಗಳಿಲ್ಲ. ಕೇಂದ್ರ ಸರ್ಕಾರ ಘೋಷಿಸಿದ ಪ್ಯಾಕೇಜ್ನಲ್ಲಿ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಭೂಮಿ ಮತ್ತು ಇತರೆ ಸವಲತ್ತು ಎಂದು ಪ್ರಕಟಿಸಿತ್ತು. ಇನ್ನೂ ನೀಡಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮೋಸ ಮಾಡಿದ್ದಾರೆ ಎಂದು ಧರಣಿ ನಿರತರು ದೂರಿದ್ದಾರೆ.