ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್ಐ) ಹಂಪಿ ವೃತ್ತದ ವ್ಯಾಪ್ತಿಗೆ ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳನ್ನು ಸೇರಿಸಿ, ಹೊಸದಾಗಿ ಹಂಪಿ ಪೂರ್ವ ವಲಯ ರಚಿಸಲಾಗಿದೆ.
ಯಾದಗಿರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ಬೀದರ್, ಹಂಪಿ ವೃತ್ತಕ್ಕೆ ಸೇರಿದ ಜಿಲ್ಲೆಗಳು. ಈ ಹಿಂದೆ ಹಂಪಿ (ಬಳ್ಳಾರಿ) ಹೊರತುಪಡಿಸಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಧಾರವಾಡ ವೃತ್ತದ ವ್ಯಾಪ್ತಿಗೆ ಸೇರಿದ್ದವು.
‘ಸರ್ಕಾರದ ಈ ನಿರ್ಧಾರದಿಂದ ಹಂಪಿ ವೃತ್ತಕ್ಕೆ ಹೆಚ್ಚಿನ ಅನುದಾನ ಸಿಗಲಿದೆ. ಭದ್ರತೆಗೆ ಹೆಚ್ಚಿನ ಸಿಬ್ಬಂದಿ, ಸ್ಮಾರಕ ರಕ್ಷಣೆಗೆ ಹೆಚ್ಚಿನ ಒತ್ತು ಸಿಗಲಿದೆ. ಪ್ರವಾಸೋದ್ಯಮ ಬೆಳವಣಿಗೆಗೂ ಅನುಕೂಲವಾಗಲಿದೆ’ ಎಂದು ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.