ಕುಲಪತಿ ಪ್ರೊ. ಸ.ಚಿ. ರಮೇಶ, ‘ವಚನಕಾರರೆಲ್ಲರ ವಚನಗಳನ್ನು ಯಾಕೆ? ಹೇಗೆ? ಯಾರಿಗೆ? ಪ್ರಸ್ತುತ ಎಂಬ ಮೂರು ಪ್ರಶ್ನೆಗಳ ಮೂಲಕ ಅರ್ಥ ಮಾಡಿಕೊಳ್ಳಬೇಕಾಗಿದೆ. 12ನೇ ಶತಮಾನದಲ್ಲಿ ಬದುಕಿದ ವಚನಕಾರ ದಾಸಿಮಯ್ಯ ಅವರ ಕಾಲದ ಸಾಮಾಜಿಕ ಸಮಸ್ಯೆಗಳಾದ ಹಸಿವು, ಬಡತನ, ಶ್ರೀಮಂತ-ಬಡವ, ಮೇಲು– ಕೀಳು ಇವು ಸಮಕಾಲೀನ ಸಮಸ್ಯೆಗಳಾಗಿದ್ದು, ಇಂದಿಗೂ– ಅಂದಿಗೂ ಅಂತಹ ವ್ಯತ್ಯಾಸಗಳು ಕಾಣಿಸುತ್ತಿಲ್ಲ’ ಎಂದರು.