ಚಕ್ಕಡಿಯಲ್ಲಿ ಬಂದ ದೊಡ್ಡಮನಿ, ತಮ್ಮ ದೇಹದ ಮೇಲೆ ಅಂಟಿಸಿಕೊಂಡಿದ್ದ ಪೋಸ್ಟರ್ ಪ್ರದರ್ಶಿಸಿದರು.ನಂತರ ಮಾತನಾಡಿದ ಅವರು, ‘ಈವರೆಗೂ ಚುನಾವಣೆ ಗೆದ್ದಿರುವ ಜನಪ್ರತಿನಿಧಿಗಳು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮಿತಿ ಮೀರಿ ಆಸ್ತಿ ಹೆಚ್ಚಿಸಿಕೊಂಡಿದ್ದಾರೆ. ಜನಸೇವೆಗಾಗಿ ಬಂದವರ ಆಸ್ತಿ ಹೇಗೆ ಹೆಚ್ಚಾಗುತ್ತದೆ ಎಂಬ ಗೊಂದಲ ನನ್ನೊಬ್ಬನಿಗೆ ಮಾತ್ರವಲ್ಲ ಜನರಲ್ಲೂ ಇದೆ. ಹೀಗಾಗಿ, ನಾನು ಈ ಬಾರಿ ಶುದ್ಧ ಜನಸೇವೆಗಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದರು.