‘ನಿಂಬೆ ಗಿಡಗಳ ನಡುವೆ ಹುರುಳಿ ಅಂತರ ಬೆಳೆಯಾಗಿ ಬೆಳೆಸಿದ್ದಾರೆ. ಜಮೀನಿನ ಸುತ್ತಲೂ 50 ಬೇವಿನ ಗಿಡಗಳನ್ನು ಬೆಳೆಸಿದ್ದಾರೆ. ಬೇವಿನ ಗಿಡಗಳಿಂದ ಬೀಸುವ ಶುದ್ಧ ಗಾಳಿಯಿಂದ ನಿಂಬೆ ಗಿಡಗಳ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಅಷ್ಟೇ ಅಲ್ಲ, ನಿಂಬೆ ಕೂಡ ದೊಡ್ಡ ಗಾತ್ರದಲ್ಲಿ ಬೆಳೆಯುತ್ತಿವೆ. ನಮ್ಮ ಜಮೀನಿನ ಸಮೀಪದಿಂದ ಹಾದು ಹೋದರೆ ನಿಂಬೆಯ ಸುವಾಸನೆ ಎಂತಹವರನ್ನು ಆಕರ್ಷಿಸದೇ ಇರದು’ ಎಂದು ಕೆ.ಪಿ. ಉಮಾಪತಿ ‘ಪ್ರಜಾವಾಣಿ’ಗೆ ತಿಳಿಸಿದರು.