‘ಗುರುವಾರ ಸಂಜೆ 6 ಗಂಟೆಯ ವೇಳೆಯಲ್ಲಿ ಗ್ರಾಮದ ನಮ್ಮ ಮನೆ ಬಳಿಗೆ ಬಂದ ಪೊಲೀಸರು, ನನ್ನ ಮತ್ತು ನನ್ನ ಮಕ್ಕಳ ಮುಂದೆಯೇ ಪತಿಯ ಜಾತಿನಿಂದನೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ ಎಳೆದೊಯ್ದರು. ಬಿಡಿಸಿಕೊಳ್ಳಲು ಹೋದ ನನಗೆ ಮತ್ತು ನನ್ನ ಮಗಳಿಗೂ ಲಾಠಿಯಿಂದ ಹೊಡೆದರು. ನಂತರ ಅಂಬೇಡ್ಕರ್ ಕಾಲೊನಿಯ ರೈಲ್ವೆ ಗೇಟ್ ಬಳಿ ವಾಹನ ನಿಲ್ಲಿಸಿ ಪತಿಯನ್ನು ಹೊರಕ್ಕೆ ದಬ್ಬಿದರು. ಆಗ ಪತಿ ಪ್ರಜ್ಞಾಹೀನರಾಗಿದ್ದು, ತಲೆಯ ಹಿಂಬದಿಯಿಂದ ರಕ್ತಸೋರುತ್ತಿತ್ತು’ ಎಂದು ಆರೋಪಿಸಿದ್ದಾರೆ.