ವಿಷ ಕುಡಿಯಲು ಆರೋಪಿ ಯತ್ನ: ಅಕ್ರಮವಾಗಿ ಬೆಳೆದ ಗಾಂಜಾ
ಗಿಡಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಂತೆ, ಆರೋಪಿ ಮರಿಯಪ್ಪ ವಿಷ ಕುಡಿಯಲು ಯತ್ನಿಸಿ, ಅಸ್ವಸ್ಥನಾಗಿದ್ದಾನೆ. ಕೂಡಲೆ ಆರೋಪಿಯನ್ನು ಕೂಡ್ಲಿಗಿಯ ಆಸ್ಪತ್ರೆಗೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ತಹಶೀಲ್ದಾರ್ ಕೆ.ಎಂ. ಗುರುಬಸವರಾಜ, ಅಬಕಾರಿ ಅಧಿಕಾರಿ ಬಸವರಾಜ ಮತ್ತು ಸಿಬ್ಬಂದಿ ಉಪಸ್ಥಿ ತರಿದ್ದರು.