ತಾಲ್ಲೂಕಿನ ಶಂಕರ್ ಸಿಂಗ್ ಕ್ಯಾಂಪಿನ ಸಮೀಪ ಏಳು ಎಕರೆ ಜಮೀನು ಹೊಂದಿರುವ ಸುಧೀರ್ ಅವರು, ಸಾವಯವ ಪದ್ಧತಿಯಲ್ಲಿ 2,200 ದಾಳಿಂಬೆ, 150 ಸಪೋಟಾ, 150 ನಿಂಬೆ ಹಾಗೂ 130 ಪೇರಲ ಗಿಡಗಳನ್ನು ಬೆಳೆಸಿದ್ದಾರೆ. ದಾಳಿಂಬೆ ಹಣ್ಣುಗಳಿಗೆ ಆಕರ್ಷಣೆಗೊಂಡು ಗಿಳಿ ಹಿಂಡು ತೋಟಕ್ಕೆ ಲಗ್ಗೆ ಇಡುತ್ತಿತ್ತು. ಇದರಿಂದ ಅಪಾರ ನಷ್ಟ ಉಂಟಾಗುತ್ತಿತ್ತು. ಇದರಿಂದ ಹೊರಬರಲು ₹ 1 ಲಕ್ಷ ವೆಚ್ಚದಲ್ಲಿ ಮೀನು ಹಿಡಿಯುವ ಪ್ಲಾಸ್ಟಿಕ್ ಬಲೆ ಖರೀದಿಸಿ, ಇಡೀ ತೋಟಕ್ಕೆ ಹಾಕಿದ್ದಾರೆ. ಅಳಿಲು ಮತ್ತು ಗಾಳಿಯಿಂದ ರಕ್ಷಿಸಲು ಹೊಲದ ಸುತ್ತ ಟಾರ್ಪಲಿನ್ ಹಾಕಿಸಿದ್ದಾರೆ. ಈಗ ಗಿಳಿಗಳ ಕಾಟ ತಪ್ಪಿದೆ.