₹50 ಸಾವಿರ ಬಂಡವಾಳದೊಂದಿಗೆ ಉದ್ಯಮ ಆರಂಭಿಸಿದ ಆನಂದ ಅವರು, ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ.ನೇರವಾಗಿ ರೈತರ ಬಳಿಯೇ ಹೋಗಿ ಕ್ವಿಂಟಾಲ್ ಗಟ್ಟಲೇ ಮಸಾಲ ಪದಾರ್ಥಗಳನ್ನು ಖರೀದಿಸುತ್ತಾರೆ. ಕಾಳು ಮೆಣಸು, ಚಕ್ಕೆ, ಜೀರಿಗೆ, ಸಾಸಿವೆ, ಸೊಂಟಿ, ಗಸಗಸೆ, ಅಜ್ಜವಾನ, ಸೋಂಪು, ಅಡುಗೆ ಸೋಡಾ, ಕುಂಕುಮ, ಅರಿಶಿಣ, ಒಣದ್ರಾಕ್ಷಿ, ಗೋಡಂಬಿ ಪುಡಿ ಸೇರಿದಂತೆ ತರಹೇವಾರಿ ವಸ್ತುಗಳು ಇವರ ಬಳಿ ಸಿಗುತ್ತವೆ.