‘ಎಲ್ಲರಿಗೂ ಶುದ್ಧ ಕುಡಿಯುವ ನೀರು ಕೊಡಬೇಕು ಎಂದು ಇಂದು ನಾವು ಮಾತನಾಡುತ್ತೇವೆ. ಆದರೆ, ಗಾಂಧೀಜಿಯವರು ಅಂದೇ ಹೇಳಿದ್ದರು. ಕೆರೆ, ಬಾವಿಗಳ ನಿಯಂತ್ರಣ ಹಳ್ಳಿಯವರ ಕೈಯಲ್ಲಿ ಇರಬೇಕು. ಹಳ್ಳಿಗಳಲ್ಲಿ ಜಾತಿ, ಮತ, ಭೇದ ಇರಬಾರದು. ಅಸ್ಪೃಶ್ಯತೆ ಆಚರಣೆಯಲ್ಲಿ ಇರಬಾರದು. ಸಹಕಾರ ತತ್ವಕ್ಕೆ ಹೆಚ್ಚಿನ ಒತ್ತು ಕೊಡುವಂತೆ ತಿಳಿಸಿದ್ದರು. ಅಷ್ಟೇ ಅಲ್ಲ, ಅವರ ಸಿದ್ಧಾಂತಗಳನ್ನು ಕೃಷಿಕರು, ಹಳ್ಳಿಗರ ಮೇಲೆ ಪ್ರಯೋಗ ಮಾಡಿದ್ದರು’ ಎಂದು ತಿಳಿಸಿದರು.