ನಗರದ ಕೊಟ್ಟೂರುಸ್ವಾಮಿ ಬಿಇಡಿ ಕಾಲೇಜಿನಲ್ಲಿ ಸಮಾಜಮುಖಿ ಪತ್ರಿಕೆಯು ಶನಿವಾರ ‘ಅರಿವಿಗೆ ನಿಲುಕದ ಗಾಂಧಿ: ಅಪ್ರಸ್ತುತ್ ಆದರ್ಶವೇ?’ ಕುರಿತು ಏರ್ಪಡಿಸಿದ್ದ ಸಂವಾದವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸತ್ಯ, ಅಹಿಂಸೆ, ಸ್ವಚ್ಛತೆ, ಸರಳತೆ, ಶಾಂತಿ, ದೇಸಿ, ಸವಿನಯ ಕಾನೂನು ಭಂಗದಂಥ ಮೌಲ್ಯಗಳನ್ನೇ ಜೀವಿಸಿದ ಗಾಂಧೀಜಿಯನ್ನು ಈಗ ಅವೆಲ್ಲಕ್ಕೂ ಸಂಕೇತವನ್ನಾಗಿಸಲಾಗಿದೆ.ಆ ಮೌಲ್ಯಗಳ ಪಾಲನೆಯಲ್ಲಿ ಮಾತ್ರ ನಾವು ಗಾಂಧಿಯಿಂದ ದೂರವಿದ್ದೇವೆ’ ಎಂದರು.