ನಗರದಲ್ಲಿ ಭಾನುವಾರ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಹಾಗೂ ಇಂಧನದ ಮೇಲಿನ ತೆರಿಗೆ ಕೈ ಬಿಡುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಹಂಪಿ ಉತ್ಸವ ಆಚರಣೆಯಲ್ಲಿ ಅನವಶ್ಯಕ ಮೀನಮೇಶ ಎಣಿಸುತ್ತಿದೆ. ಜಿಲ್ಲಾಡಳಿತ ನಿಗದಿಸಿದ್ದ ಜ.12, 13ರಂದು ಉತ್ಸವ ಆಚರಿಸದಿದ್ದರೆ, ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ಎಂದು ಹೇಳಿದರು.