ಆನೆಗೊಂದಿ, ರಾಮದುರ್ಗ, ಚಿಕ್ಕರಾಮಪುರ, ಹನುಮನಹಳ್ಳಿ, ಸಣಾಪುರದಲ್ಲಿ ಕಾನೂನುಬಾಹಿರವಾಗಿ ಕೃಷಿ ಜಮೀನುಗಳಲ್ಲಿ ನಡೆಸುತ್ತಿದ್ದ 49 ರೆಸಾರ್ಟ್, ಹೋಂ ಸ್ಟೇ, ಹೋಟೆಲ್ಗಳನ್ನು ಇತ್ತೀಚೆಗೆ ಪ್ರಾಧಿಕಾರ ತೆರವುಗೊಳಿಸಿದೆ. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ 2020ರ ಮಾರ್ಚ್ 3ರಂದು ವಿರೂಪಾಪುರ ಗಡ್ಡಿಯಲ್ಲಿನ 19 ರೆಸಾರ್ಟ್ಗಳನ್ನು ಪ್ರಾಧಿಕಾರ ತೆರವುಗೊಳಿಸಿತ್ತು. ಒಂದಾದ ನಂತರ ಒಂದು ಅಕ್ರಮ ರೆಸಾರ್ಟ್, ಹೋಟೆಲ್ಗಳನ್ನು ತೆರವುಗೊಳಿಸುತ್ತಿರುವ ಪ್ರಾಧಿಕಾರ ಈಗ ಹಂಪಿ, ಕಡ್ಡಿರಾಂಪುರ, ಕಮಲಾಪುರದಲ್ಲೂ ಕಠಿಣ ಕ್ರಮಕ್ಕೆ ಮುಂದಾಗಿದೆ.