ಸುಸಜ್ಜಿತವಾದ ತರಕಾರಿ ಮಾರುಕಟ್ಟೆಯ ಪರಿಷ್ಕೃತ ಯೋಜನೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಜಿ+2 ಮಾದರಿ ಸೇರಿಕೊಂಡಿತು. ಆದರೆ, ನಂತರ ಯಾವುದೇ ರೀತಿಯ ಬೆಳವಣಿಗೆ ನಡೆಯಲಿಲ್ಲ. ಹಳೆಯ ತರಕಾರಿ ಮಾರುಕಟ್ಟೆ ಜಾಗ ಸದ್ಯ ಸ್ಮಶಾನ ಭೂಮಿಯಂತೆ ಗೋಚರಿಸುತ್ತಿದೆ. ಬಿಡಾಡಿ ದನಗಳು, ನಾಯಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಕೆಲವರು ವಾಹನಗಳನ್ನು ಅಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಿ ಹೋಗುತ್ತಿದ್ದಾರೆ. ಮೂತ್ರ ವಿಸರ್ಜನೆ, ಕಸ ಎಸೆದು ಹೋಗುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ದುರ್ಗಂಧ ಹರಡಿದೆ.