ಮನೆಯಿಂದ ಹೊರಗೆ ಬರದಂತೆ ಬೆಳಿಗ್ಗೆ ಪೊಲೀಸರು ಧ್ವನಿವರ್ಧಗಳ ಮೂಲಕ ಪ್ರಚಾರ ಕೈಗೊಂಡು ಮನವಿ ಮಾಡಿದ್ದರು. ಆದರೆ, ಅದನ್ನು ಲೆಕ್ಕಿಸದೆ ಖರೀದಿಗೆ ಮಾರುಕಟ್ಟೆಗೆ ಬಂದಿದ್ದರು. ಜನರ ದಟ್ಟಣೆ ಹೆಚ್ಚಾಗಿರುವುದನ್ನು ಗಮನಿಸಿದ ಪೊಲೀಸರು ಲಾಠಿಯಿಂದ ಹೊಡೆದು ಅವರನ್ನು ಚದುರಿಸಿದರು. ನಗರದ ತುಂಬೆಲ್ಲಾ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಸಕಾರವಿಲ್ಲದೆ ರಸ್ತೆ ಬಂದರೆ ಅವರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಮಂಗಳವಾರ ಐದು ಹೋಟೆಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ಹತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.